ಹೊನ್ನಾವರ ಕಾಸರಗೋಡು ತೊಂಕದಲ್ಲಿ  ಕೇಂದ್ರ ಸರಕಾರ ನಿರ್ಮಿಸಲು ಹೊರಟಿರುವ ಬಂದರು ಕಾರ್ಯದ ಬಗ್ಗೆ ತಪ್ಪು ಮಾಹಿತಿ ಹರಡಿ ಶಾಂತಿ ಕದಡುವ ಪ್ರಯತ್ನ

ನನಗೆ ಕೆಲವರು ಹೇಳಿರುವ ಮಾಹಿತಿಯನ್ನು ತಪ್ಪಾಗಿ ತಿಳಿದು  ಆತ್ಮಹತ್ಯ ಮಾಡಿಕೊಳ್ಳುವುದಾಗಿ ಹೇಳಿಕೆ ನಿಡಿದ್ದೇ ಸಚಿವರ ಬಗ್ಗೆ  ಅವಹೇಳನವಾಗಿ ಹೇಳಿಕೆ ನೀಡಿದ ಬಾಲಕಿ ಕನಪೇಶನ್

ಹೊನ್ನಾವರ ತೊಂಕ ಬಂದರು ನಿರ್ಮಾಣದ ವಿಷಯದಲ್ಲಿ ಕೆಲವು ನಾಯಕರು ಸಾರ್ವಜನಿಕರ ದಾರಿ ತಪ್ಪಿಸಲಾಗುತ್ತಿದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಸ್ ಪಿ M ನಾರಾಯಣ

ಕಾರವಾರ : ಹೊನ್ನಾವರ ತಾಲ್ಲೂಕಿನ ಕಾಸರಗೋಡು ತೊಂಕದಲ್ಲಿ ಕೇಂದ್ರ ಸರಕಾರ ಹೊಸದಾಗಿ ಬಂದರು ನಿರ್ಮಾಣಕ್ಕೆ ಮುಂದಾಗುತ್ತಿದ್ದೂ  ಈ ಬಗ್ಗೆ ಕೆಲವು  ವಿಕ್ರತ ಮನಸ್ತೀಯ ವ್ಯಕ್ತಿಗಳು ಹಾಗೆ ಕೆಲವು ನಾಯಕರು ಎನ್ನಿಸಿಕೊಂಡಿರುವವರು ರಾಜಕೀಯ ಹಿತಾಸಕ್ತಿಗಾಗಿ ಜನರನ್ನು ತಪ್ಪು ದಾರಿಗೆ ಎಳೆದು ಸರಕಾರದ ಅಭಿವೃದ್ಧಿ ಕಾರ್ಯಕ್ಕೆ ತೊಂದರೆ ನೀಡಿದ್ದಲ್ಲದೆ ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿದ್ದಾರೆ

ಕೆಲವು ನಾಯಕರು ಎಷ್ಟು ನೀಚ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದರೆ  ಒಂದು ಬಾಲಕಿಗೆ ತಪ್ಪು ಮಾಹಿತಿಯನ್ನು ನೀಡಿ  ಆ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೆರೆಪಣೆ ನೀಡಿದ್ದಲ್ಲದೆ ಬಾಲಕಿ ಮೂಲಕ ಜಿಲ್ಲೆಯ ಉಸ್ತುವಾರಿ ಸಚಿವರೀಗೆ  ಅಗೌರವ ಪದವನ್ನು ಆಕೆಯ ಮೂಲಕ ಪ್ರಯೋಗ  ಮಾಡಿಸುತ್ತಾರೆ ಈ ನಾಯಕರ   ಸ್ವಾರ್ಥಕ್ಕೆ ಒಂದು ವೇಳೆ  ಆ ಬಾಲಕಿ  ಕಿಡಿಗೇಡಿಗಳ ತಪ್ಪು ಮಾಹಿತಿಯ ಕಾರಣ  ಆತ್ಮಹತ್ಯೆಯನ್ನು ಮಾಡಿದ್ದರೆ ಜಿಲ್ಲೆಯಲ್ಲಿನ ಪರಿಸ್ಥಿತಿ ಎಲ್ಲಿಗೆ ತಲುಪುತ್ತಿತ್ತು  ಅಂದು ಹೊನ್ನಾವರದ  ಪರೇಶ ಮೇಸ್ತನ ಆಕಸ್ಮಿಕ ಸಾವನ್ನು ಕೆಲವು ರಾಜಕಾರಣಿಗಳು ಮತ್ತು ಕಿಡಿಗೇಡಿಗಳು  ಕೊಲೆಯೆಂದು ಬಿಂಬಿಸಿ  ಜಿಲ್ಲೆಗೆ ಜಿಲ್ಲೆಯೇ ಹೊತ್ತಿ ಉರಿಯುವಂತೆ ಮಾಡಿ ರಾಜಕೀಯ ಬೇಳೆ ಬೇಯಿಸಿ ಕೊಂಡಿದ್ದರು ಈಗಲೂ ಕೂಡ ಅಂತಹದ್ದೇ ಒಂದು  ಪ್ಲಾನ್ ಜಿಲ್ಲೆಯಲ್ಲಿ   ಬಂದರು ನಿರ್ಮಾಣದ ವಿಷಯದಲ್ಲಿ  ನಡೆಯುತ್ತಿದೆ ಎಂಭ ಅನುಮಾನಗಳು ಮೂಡುತ್ತಿದೆ

ಮೊನ್ನೆ ಬಾಲಕಿ ಹೇಳಿಕೆಗೆ ಸಂಭಂಧಿಸಿದಂತೆ ಹುಡುಗಿಯ ಮನೆಗೆ ಅಸಿಸ್ಟೆಂಟ್ ಕಮಿಷನರ್ ಭಟ್ಕಳ್ ಮತ್ತು ಡಿಡಿಪಿಐ ಹೊನ್ನಾವರ ರವರು ಭೇಟಿ ನೀಡಿ ವಿಚಾರಿಸಿ,ಹುಡುಗಿಗೆ ಸೂಕ್ತ ಬುದ್ದಿವಾದ ಹೇಳಿ, ಮನವೊಲಿಸಿರುತ್ತಾರೆ. ಯಾರೋ ಬೇರೆಯವರು ಹೇಳಿದಂತೆ ಸರಿಯಾಗಿ ಅರ್ಥ ಮಾಡಿಕೊಳ್ಳದೆ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಹೇಳಿಕೆ ನೀಡಿರುತ್ತೇನೆ. ನನ್ನಿಂದ ತಪ್ಪಾಗಿರುತ್ತದೆ. ಇನ್ನು ಮೇಲೆ ಈ ರೀತಿ ನಡೆದುಕೊಳ್ಳುವುದಿಲ್ಲ ಅಂತ ವಿಡಿಯೋದಲ್ಲಿ ಹೇಳಿಕೆ ನೀಡಿರುತ್ತಾಳೆ

ಬಂದರು ನಿರ್ಮಾಣದ ಬಗ್ಗೆ ಕೆಲವು ನಾಯಕರು ಮತ್ತು ಕಿಡಿಗೇಡಿಗಳು ಸಮಾಜದ ಶಾಂತಿ ಕದಡುವ ವಿಷಯಕ್ಕೆ ಸಂಭಂಧಿಸಿದಂತೆ ಜಿಲ್ಲಾ ಎಸ್ ಪಿ ನಾರಾಯಣ ಅವರು ಮಾಧ್ಯಮದ  ಜೊತೆ ಮಾತನಾಡಿ  ಹೊನ್ನಾವರ ಬಂದರು ನಿರ್ಮಾಣಕ್ಕೆ ಸಂಭಂಧಿಸಿದಂತೆ   ಉಸ್ತುವಾರಿ ಸಚಿವರು ಶಾಸಕರುಗಳ ಜೊತೆ ಈಗಾಗಲೇ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇವೆ  ಬಂದರು ನಿರ್ಮಾಣಕ್ಕೆ ಸಂಭಂಧಿಸಿದಂತೆ ಸಾರ್ವಜನಿಕರಿಗೆ ತೊಂದರೆ ಆದಂತೆ ಯಾರು ಕೂಡ ನಿರಾಶ್ರಿತರಾಗದಂತೆ ನೋಡಿಕೊಳ್ಳಲಾಗುದು ಎಂಭ ಭರವಸೆ ನೀಡಿದ್ದಾರೆ ಯಾರಿಗೂ ಇಲ್ಲಿ ಅನ್ಯಾಯ ಆಗಲಾರದು ಕೆಲವು ನಾಯಕರು ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡಿ ಸಮಾಜದಲ್ಲಿ ಶಾಂತಿ ಕಡಡುವ ವಿಕ್ರತಿ ನಡೆಸುತ್ತಿದ್ದಾರೆ ಆ ನಾಯಕರ ಬಗ್ಗೆ ನಮಗೆ ಮಾಹಿತಿ ಇದೆ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಲ್ಲಲಾಗುದು ಎಂದು ಎಚ್ಚರಿಕೆ ನೀಡಿದರು

ಒಟ್ಟಾರೆ  ಕೆಲವು ರಾಜಕೀಯ ನಾಯಕರೆನ್ನಿಸಿಕೊಡವರು ತಮ್ಮ ರಾಜಕೀಯ ಲಾಭಜಕಾಗಿ ಎಂತಹ ನೀಚ ಮಟ್ಟಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ  ಇಂತಹ ಘಟನೆಗಳೇ ಸಾಕ್ಷಿ ಆಗಿದೆ

WhatsApp
Facebook
Telegram
error: Content is protected !!
Scroll to Top