ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಸಚಿವ ಮಾಂಕಾಳು ವೈದ್ಯರ ವತಿಯಿಂದ ಜನತಾ ದರ್ಶನ

ಜನತಾ ದರ್ಶನದಲ್ಲಿ  ತಮ್ಮ ಸಮಸ್ಯೆಗೆ ಪರಿಹಾರ ಪಡೆದ ಅಸಂಖ್ಯ ಸಾರ್ವಜನಿಕರು

ಜನಸೇವೆಯೇ ಜನಾರ್ದನ ಸೇವೆ : ಸಚಿವ ಮಾಂಕಾಳು ವೈದ್ಯ

ಭಟ್ಕಳ : ಜನಪ್ರತಿನಿದಿಗಳು ಎನ್ನಿಸಿ ಕೊಂಡ ಮೇಲೆ  ಜನಸೇವೆ ಮಾಡಬೇಕು ಜನಸೇವೆ ಮಾಡಲು ಕೂಡ ಪೂರ್ವ ಜನ್ಮದ ಪುಣ್ಯ ಬೇಕು ನನಗೆ ಆಭಾಗ್ಯ ಬಂದಿದೆ ನನ್ನ ಕ್ಷೇತ್ರದ ಜನಸಾಮಾನ್ಯರ ಕುಂದುಕೊರತೆ ನಿವಾರಣೆಯೇ ಈ ಜನತಾ ದರ್ಶನದ ಮುಖ್ಯ ಉದೇಶ ಪ್ರತಿಯೊಬ್ಬರೂ ಈ ಜನತಾ ದರ್ಶದ ಉಪಯೋಗ ಪಡೆದು ತಮ್ಮ ಸಮಸ್ಯೆ ಬಗೆ ಹರಿಸಿಕೊಳ್ಳಿ ಎಂದು ಸಚಿವ ಮಾಂಕಾಳು ವೈದ್ಯರು ಸಾರ್ವಜನಿಕರಲ್ಲಿ ಹೇಳಿದರು

ಹೌದು ವೀಕ್ಷಕರೇ ಸಚಿವ ಮಾಂಕಾಳು ವೈದ್ಯರು ಶುಕ್ರವಾರ ಮತ್ತು ಶನಿವಾರ ತಮ್ಮ  ಹೊನ್ನಾವರ ಮತ್ತು ಭಟ್ಕಳ ಕಚೇರಿಯಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇ ಎರಡು ದಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಮ್ಮ  ಕುಂದು ಕೊರತೆಯನ್ನು ಸಚಿವರ ಮುಂದಿಟ್ಟುಕೊಂಡು ತಮ್ಮ ಸಮಸ್ಯೆಗೆ ಪರಿಹಾರ ಪಡೆದುಕೊಂಡರು ಈ ಸಂದರ್ಭದಲ್ಲಿ ಸಚಿವ ಮಾಂಕಾಳು ವೈದ್ಯರು ಮಾತನಾಡಿ ನಾನು ಜನಸೇವೆಯೇ ಜನಾರ್ದನನ ಸೇವೆ ಎಂಬ ಸಿದ್ದಾಂತದಲ್ಲಿ ನಂಬಿಕೆ ಇತ್ತುಕೊಂಡವನು ಜನ ನನ್ನನ್ನು ಉನ್ನತ ಸ್ಥಾನಕ್ಕೆ ತಂದು ಕುಳ್ಳಿರಿಸಿದ್ದಾರೆ ಅವರ ಋಣ ನನ್ನ ಮೇಲಿದೆ ನಾನು ನನ್ನ ಕರ್ತವ್ಯ ಯಾವತ್ತೂ ಮರೆಯಲಾರೆ ನನ್ನ ಕ್ಷೇತ್ರದ ಜನರನ್ನು ಗಮನದಲ್ಲಿ ಇಟ್ಟುಕೊಂಡು ಈ ಜನತಾ ದರ್ಶನ ಕಾರ್ಯಕ್ರಮ ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದೇವೆ ಜನಸಾಮಾನ್ಯರು ಎಂತಹದೆ ಸಮಸ್ಯೆ ಇದ್ದರು ಅದನ್ನು ಪರಿಹಾಸಿಕೊಳ್ಳ ಬಹುದಾಗಿದೆ ನಿಮ್ಮ ಸೇವೆಯನ್ನು ಮಾಡಲೇ ನಾನಿರುವುದು ಎಂದು ಹೇಳಿದರು

ಈ ಸಂದರ್ಭದಲ್ಲಿ ಮಂಕಿ ಬ್ಲಾಕ್ ಕಾಂಗ್ರೆಸ್ ಹಾಗೂ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕಾರ್ಯದರ್ಶಿ ಸುರೇಶ ನಾಯ್ಕ ಕಾಂಗ್ರೆಸ್ ಮುಖಂಡರಾದ ನಾರಾಯಣ ನಾಯ್ಕ ವೆಂಕಟೇಶ್ ದೇವಾಡಿಗ ಮಂಜುನಾಥ ನಾಯ್ಕ  ಜಾಲಿ ಪಟ್ಟಣ ಪಂಚಾಯತ್ ಜಾಲಿ ಪಟ್ಟಣ ಪಂಚಾಯತ ಉಪಾಧ್ಯಕ  ಇಮ್ರಾನ್ ಲಂಕಾ standing committee  ಅಧ್ಯಕ್ಷ  ಈಶ್ವರ ಮೊಗೇರ್  ಸದಸ್ಯ ರಮೇಶ ನಾಯ್ಕ ಇನ್ನಿತರ ಮುಖಂಡರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top