ಭಟ್ಕಳದಲ್ಲಿ ಶ್ರೀ ಕೌಶಲ್ಯಾಭಿವೃದ್ದಿ ಕಂಪ್ಯೂಟರ್ ತರಬೇತಿ ಕೆಂದ್ರ ಉದ್ಗಾಟನೆ

ಭಟ್ಕಳ : ತಾಲೂಕಿನ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿಯ ಆಶ್ರಯದಲ್ಲಿ ಜೂನ್ 20 ರಂದು ಶ್ರೀ ವೆಂಕಟೇಶ್ವರ ಕೌಶಲಾಭಿವೃದ್ಧಿ ಕಂಪ್ಯೂಟರ್ ತರಬೇತಿ ಕೇಂದ್ರದ ಹೆಚ್ಚುವರಿ ಕೇಂದ್ರವನ್ನು ದೇವಸ್ಥಾನದ ಅಧ್ಯಕ್ಷರಾದ ಅರುಣ್ ನಾಯ್ಕ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಭಟ್ಕಳದ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಕೃಷ್ಣ ನಾಯ್ಕ ಅಸಕೇರಿ ಮಾತನಾಡಿ ಈ ಹಿಂದೆ ಕೇವಲ ಮೂರ್ನಾಲ್ಕು ಕಂಪ್ಯೂಟರ್ ನೊಂದಿಗೆ ಈ ಕೇಂದ್ರ ಆರಂಭವಾಯಿತು ಆ ನಂತರದಲ್ಲಿ ಶ್ರೀ ವೆಂಕಟೇಶ್ವರ ಕೌಶಲಾಭಿವೃದ್ಧಿ ಕಂಪ್ಯೂಟರ್ ತರಬೇತಿ ಕೇಂದ್ರ ಎಂಬ ಹೆಸರಿನಲ್ಲಿ ಕೇಂದ್ರವನ್ನು ನೋಂದಣಿ ಮಾಡಿಸಲಾಯಿತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಇದೀಗ ದಾನಿಗಳ ನೆರವಿನೊಂದಿಗೆ ಹೆಚ್ಚುವರಿಯಾಗಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ಮುಂಬರುವ ದಿನಗಳಲ್ಲಿ ಕಂಪ್ಯೂಟರ್ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ ನೆರವಾಗುತ್ತದೆ ಎಂದರು.

ಈರಪ್ಪ ನಾಯ್ಕ, ಮೋಹನ್ ನಾಯ್ಕ, ಡಿ.ಬಿ ನಾಯ್ಕ, ಡಿ.ಎಲ್ ನಾಯ್ಕ ಎಮ್ ಕೆ ನಾಯ್ಕ ಮತ್ತಿತರರು ಇದ್ದರು.

WhatsApp
Facebook
Telegram
error: Content is protected !!
Scroll to Top