ರಾಷ್ಟೀಯ ಹೆದ್ದಾರಿ ಕಾಮಗಾರಿ ಸಂಬಂದ ಜಿಲ್ಲೆಯಲ್ಲಿ ಇನ್ನೆಷ್ಟು ಬಲಿಯಾಗ ಬೇಕು ಸಚಿವ ಮಂಕಾಳ ವೈದ್ಯರ ಆಕ್ರೋಶದ ಪ್ರಶ್ನೇ

ನಿಮ್ಮ ಐ ಆರ್‌ ಬಿ ಬೆಜವಾಬ್ದಾರಿ ತನಕ್ಕೆ ಇಡಿ ಜಿಲ್ಲೆಯ ಜನತೆ ನಲುಗಿ ಹೊಗಿದ್ದಾರೆ

ಕಾರವಾರ : ರಾಷ್ಟಿçÃಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಸಚಿವರು ಕಾಮಗಾರಿ ಆರಂಭಗೊAಡು 9 ವರ್ಷಗಳು ಕಳೆದರೂ ಇನ್ನೂ ಮುಕ್ತಾಯಗೊಂಡಿಲ್ಲ, ಟೋಲ್ ಮಾತ್ರ ವಸೂಲಿ ಮಾಡುತಿದ್ದೀರಿ, ಪ್ರತೀ ಸಭೆಯಲ್ಲೂ ಕಾಮಗಾರಿಯ ಪ್ರಗತಿಯ ಬಗ್ಗೆ ಸೂಕ್ತ ಉತ್ತರ ದೊರೆಯುವುದಿಲ್ಲ. ಕಾಮಗಾರಿ ಮುಕ್ತಾಯಗೊಳಿಸದೇ ಶೇಖರಣೆ ಮಾಡಿಟ್ಟುಕೊಂಡಿರುವ ಜಲ್ಲಿ, ಮರಳು ಮತ್ತು ಕಲ್ಲುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೌದು ವಿಕ್ಷಕರೆ ಮೊನ್ನೆ ನಡೆದ ಕೆ ಡಿ ಪಿ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐ ಆರ್‌ ಬಿ ಕಂಪನಿ ಎಂಜಿನಿಯರ್‌ ಅನ್ನು ಸಚಿವ ಮಂಕಾಳು ವೈದ್ಯರು ತಿವೃತವಾಗಿ ತರಾಟೆಗೆ ತೆಗೆದುಕೊಂಡಿದ್ದು ನಿಮ್ಮ ಐ ಆರ್‌ ಬಿ ಕಂಪನಿ ನಡೆಸುವ ಅವಾಂತರಕ್ಕೆ ನನ್ನ ಜಿಲ್ಲೆಯ ಜನತೆ ದಿನ ನಿತ್ಯ ನರಕವನ್ನು ಅನುಭವಿಸುತ್ತಿದ್ದಾರೆ ಎಷ್ಟೋ ಅಮಾಯಕ ಜೀವಗಳು ನಿಮ್ಮ ಅವೈಜ್ಙಾನಿಕ ಕಾಮಗಾರಿಯ ಕಾರಣ ಜೀವವನ್ನು ಕಳೆದುಕೊಂಡಿದ್ದಾರೆ ಎಷ್ಟೋ ಕುಟುಂಬಗಳು ಅನಾಥವಾಗಿ ಬೀದಿಗೆ ಬಂದು ನಿಂತಿದೆ ನಿಮ್ಮ ಈ ರಸ್ತೆ ಕಾಮಗಾರಿಗೆ ಇನ್ನೆಷ್ಟು ಜೀವ ಬಲಿಯಾಗ ಬೇಕಾಗಿದೆ ಎಂದು ಆಕ್ರೋಶ ವೈಕ್ತ ಪಡಿಸಿದರು ಇದಕ್ಕೆ ಐ ಆರ್‌ ಬಿ ಕಂಪನಿ ಎಂಜಿನಿಯರ್‌ ಉತ್ತರ ಇಲ್ಲದೆ ನೀರುತ್ತರವಾಗಿ ನಿಂತಿದ್ದು ಐ ಆರ್‌ ಬಿ ಕಂಪನಿಯ ರಸ್ತೆ ಕಾಮಗಾರಿಗೆ ಹಿಡಿದ ಕನ್ನಡಿಯಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ

ಈ ಕಂಪನಿಯ ಪ್ರತಿನಿದಿ ಸರಿಯಾದ ಉತ್ತರ ನೀಡಲು ಸಮರ್ಥನಾಗದ ಕಾರಣ ಸಚಿವರು ಇನ್ನಷ್ಟು ಆಕ್ರೋಶಗೊಂಡು ಉತ್ತರ ನೀಡಲು ಸಮರ್ತರಿಲ್ಲದೆ ಮೇಲೆ ಯಾಕೆ ಸಭೆಗೆ ಬಂದು ಸಮಯ ಹಾಳುಮಾಡುತ್ತಿರು ಪ್ರತೀ ಸಭೆಯಲ್ಲೂ ಕಾಮಗಾರಿಯ ಪ್ರಗತಿಯ ಬಗ್ಗೆ ಸೂಕ್ತ ಉತ್ತರ ನೀವು ನೀಡದೆ ತಪ್ಪಿಸಿಕೊಳ್ಳುತ್ತಿರಿ ಈ ಸಂದರ್ಬದಲ್ಲಿ ಸಚಿವರು ಕಾಮಗಾರಿ ಮುಕ್ತಾಯಗೊಳಿಸದೇ ಶೇಖರಣೆ ಮಾಡಿಟ್ಟುಕೊಂಡಿರುವ ಜಲ್ಲಿ, ಮರಳು ಮತ್ತು ಕಲ್ಲುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು ಈ ಸಂದರ್ಬದಲ್ಲಿ 6 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ರಾಷ್ಟಿçÃಯ ಹೆದ್ದಾರಿ ಇಲಾಖೆಯ ಇಂಜಿನಿಯರ್ ಸಭೆಯಲ್ಲಿ ಸಭೂಬು ಹೇಳುವ ಪ್ರಯತ್ನವನ್ನು ಮಾಡಿದರು

WhatsApp
Facebook
Telegram
error: Content is protected !!
Scroll to Top