ಸಚಿವರ ಆದೇಶದಂತೆ ೧೪ ವರ್ಷದ ಸಮಸ್ಯೆ ಪರಿಹಾರ
ಭಟ್ಕಳ : ತಾಲೂಕಿನ ಬೆಳ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದಿವ್ತಗೋಳಿಯಲ್ಲಿ ಇಬ್ಬರ ಮದ್ಯ ಎರ್ಪಟ್ಟಿದ ವ್ಯಾಜ್ಯ ಸಂಬಂದ ಗಟಾರಕ್ಕೆ ಮಣ್ಣು ತುಂಬಿದ್ದ ಹಿನ್ನೆಲೆಯಲ್ಲಿ ೧೪ ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ಕ್ರತಕ ನೇರೆ ನಿರ್ಮಾಣವಾಗಿ ಮೂರನೆ ವ್ಯೆಕ್ತಿಯ ಮನೆ ಹಾಗು ಜಾಗಕ್ಕೆ ನೀರು ನುಗ್ಗಿ ಆತ ತೀವೃ ತೊಂದರೆ ಅನುಭವಿಸುವಂತಾಗಿತ್ತು ಅಲ್ಲದೆ ಸಾರ್ವಜನಿಕರಿಗೆ ವಿಧ್ಯಾರ್ಥಿಗಳಿಗೆ ತೀವೃ ತೊಂದರೆ ಉಂಟಾಗುತ್ತಿತ್ತು ಇದನ್ನು ಅರಿತ ಸಚಿವ ಮಂಕಾಳು ವೈದ್ಯರು ಸಮಸ್ಯೆ ಬಗೆ ಹರಿಸುವಂತೆ ತಾಲೂಕ ತಹಶಿಲ್ದಾರರಿಗೆ ಆದೇಶವನ್ನು ನಿಡಿದ್ದರು ಈ ಹಿನ್ನೆಲೆಯಲ್ಲಿ ತಾಲೂಕ ತಹಶಿಲ್ದಾರರು ಸಮಸ್ಯೆಯನ್ನು ಬಗೆಹರಿಸಿದ ಮಾಹಿತಿ ತಿಳಿದು ಬಂದಿದೆ .
ಹೌದು ವೀಕ್ಷಕರೆ ಬೆಳ್ಕೆ ಗ್ರಾಮದ ದಿವ್ತಗೋಳಿ ಮಜಿರೆಯ ನಿವಾಸಿಗಳಾದ T ಕೈರಾ ಅಲಿ ಸಾಹೇಬ ಹಾಗೂ ಸೋಮಪ್ಪ ಚಣ್ಣಯ್ಯ ನಾಯ್ಕಇವರಿಬ್ಬರ ನಡುವೆ ನೀರಿನ ಕಾಲುವೆಗೆ ಸಂಬಂದಿಸಿದಂತೆ ಗಟಾರಕ್ಕೆ ಲೊಡಗಟ್ಟಲೆ ಮಣ್ಣು ಹಾಕಿ ಮುಚ್ಚಲಾಗಿತ್ತು ಎಂದು ತಿಳಿದು ಬಂದಿದ್ದು ಸುಮಾರು 14 ವರ್ಷ ಗಳಿಂದ ಈ ಸಂಬಂದ ಕೋರ್ಟ್ ವ್ಯಾಜ್ಯ ನಡೆಯುತಿದ್ದು ಆದರೆ ಮೊನ್ನೆ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಕಿ ಕ್ರತಕ ನೇರೆ ಹಾವಳಿ ಸ್ರಷ್ಡಿಯಾಗಿ ಮೂರನೆ ವ್ಯಕ್ತಿ ಕ್ರಷ್ಣ ತಿಮ್ಮಪ್ಪ ಕರಡೆ ಅವರ ಮನೆ ಮತ್ತು ಜಾಗಕ್ಕೆ ನೀರು ನುಗ್ಗಿ ತಿವೃ ತೊಂದರೆಗೆ ಇಡಾಗಿದ್ದರು ಅಲ್ಲದೆ ಈ ಸಮಸ್ಯೆಯಿಂದ ಬೆಳ್ಕೆ ಗ್ರಾಮ ಪಂಚಾಯತ್ ಪಂಪ್ ಹೌಸ್ ಒಂದಕ್ಕೆ ನೀರು ನುಗ್ಗಿ ಸಾರ್ವಜನಿಕ ಆಸ್ತಿಗೆ ಹಾನಿ ಉಂಟಾಗಿದ್ದಲ್ಲದೆ ಸಾರ್ವಜನಿಕರಿಗೆ ಮತ್ತು ಶಾಲೆಗೆ ತೆರಳುವ ವಿಧ್ಯಾರ್ಥಿಗಳ ಜೀವಕ್ಕೆ ಕುತ್ತು ಉಂಟಾಗುತ್ತಿತ್ತು ಎಂದು ತಿಳಿದು ಬಂದಿದೆ ಈ ಬಗ್ಗೆ ಮಾಹಿತಿ ಪಡೆದ ಸಚಿವ ಮಂಕಾಳು ವೈದ್ಯರು ತಾಲೂಕ ತಹಶಿಲ್ದಾರ್ ನಾಗರಾಜ ನಾಯ್ಕಡ್ ಅವರಿಗೆ ಸಮಸ್ಯೆ ಬಗೆ ಹರಿಸುವಂತೆ ಆದೇಶ ಮಾಡಿದ್ದಾರೆ ತಹಶಿಲ್ದಾರ್ ಇದರ ನಾಯಕತ್ವವನ್ನು ವಹಿಸಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ ಈ ಸಂದರ್ಬದಲ್ಲಿ ವಾಗ್ವಾದಗಳು ನಡೆದಿದ್ದು ಸ್ಥಳದಲ್ಲಿದ್ದ ತಹಶಿಲ್ದಾರರು ಹಾಗು ಭಟ್ಕಳ ಗ್ರಾಮೀಣ ಠಾಣಾ ಪಿ ಎಸ್ ಐ ರನ್ನ ಗೌಡಾ ಪಾಟಿಲ್ ಇವರು ವ್ಯಾಜ್ಯ ಹೊಂದಿರುವ ಇಬ್ಬರು ಪಕ್ಷಗಾರರ ಮನವೋಲಿಸಿ ಹಾಗು ಗಟಾರಕ್ಕೆ ಹಾಕಿದ್ದ ಲೊಡ್ ಗಟ್ಟಲೆ ಮಣ್ಣನ್ನು ತೇರವುಗೊಳಿಸಿ ಸುಮಾರು ೧೪ ವರ್ಷದ ವ್ಯಾಜ್ಯವನ್ನು ತಹಶಿಲ್ದಾರರ ಮುಂದಾಳತ್ವದಲ್ಲಿ ಬಗೆ ಹರಿಸಲಾಯಿತು ಹಾಗೆ ೧೪ ವರ್ಷಗಳಿಂದ ಕೊರ್ಟಿನಲ್ಲಿ ನಡೆಯುತ್ತಿದ್ದ ವ್ಯಾಜ್ಯವನ್ನು ಇಬ್ಬರು ಪಕ್ಷಗಾರರು ಪರಸ್ಪರ ಒಪ್ಪಿಕೊಂಡು ಹಿಂತೆಗೆದುಕೊಳ್ಳುದಾಗಿ ಹೆಳಿದ್ದಾರೆ ಎಂದು ತಿಳಿದು ಬಂದಿದೆ ಒಟ್ಟಾರೆ ೧೪ ವರ್ಷದ ಗಂಭಿರ ಸಮಸ್ಯೆಯೊಂದು ತಹಶಿಲ್ದಾರ್ ನಾಗರಾಜ ನಾಯ್ಕಡ್ ಅವರ ಮದ್ಯಸ್ತಿಕೆಯಲ್ಲಿ ಬಗೆಹರಿಯಿತು ಎಂದರೆ ತಪ್ಪಿಲ್ಲಾ
ಇನ್ನು ತಾಲೂಕಿನಲ್ಲಿ ಮಳೆಗಾಲಕ್ಕೆ ಸಂಬಂದಿಸಿ ಯಾವುದೆ ಸಮಸ್ಯೆ ಉಂಟಾದಲ್ಲಿ ಕೂಡಲೆ ಬಗೆ ಹರಿಸಬೇಕು ಹಾಗೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ನೊಡಿಕೊಳ್ಳಿ ಎಂದು ಸಚಿವ ಮಂಕಾಳು ವೈದ್ಯರು ಆದೇಶ ಮಾಡಿದ್ದಾರೆ ಎಂದು ತಿಳಿದು ಬಂದಿದೆ
ಈ ಸಂದರ್ಬದಲ್ಲಿ R I ವಿಶ್ವನಾಥ ಗಾವ್ಕರ್ , ವಿ ಎ ಐಶ್ವರ್ಯ , ಬೆಳ್ಕೆ ಗ್ರಾಮ ಪಂಚಾಯತ್ ಪಿಡಿಒ ಬೆಳ್ಕೆ ಗ್ರಾಮ ಸಹಾಯಕ ಉದಯ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು .