ಭಟ್ಕಳ ತಾಲೂಕ ಸೊಡಿಗದ್ದೆ ಮೊಗೇರಕೇರಿಯಲ್ಲಿ ಮಿನುಗಾರಿಕೆಗೆ ತೆರಳಿದ ಮಿನುಗಾರ ಸಾವು

ಆಕಸ್ಮಿಕ ಅವಘಡಕ್ಕೆ  ಬಿಲಿಯಾದ ಮಂಜುನಾಥ  ಮೊಗೇರ್

ಭಟ್ಕಳ: ತಾಲೂಕಿನ ಸೋಡಿಗದ್ದೆಯ ಮೊಗೇರಕೇರಿ  ಕಡಲ ತೀರದ ಹಿನ್ನೀರಿನಲ್ಲಿ ಮೀನುಗಾರನೊಬ್ಬ ಮೀನುಗಾರಿಕೆ ಮಾಡುತ್ತಿರುವಾಗ ಬಲೆಯ ಹಗ್ಗ ಕುತ್ತಿಗೆಗೆ ಸಿಕ್ಕಿಕೊಂಡು   ನೀರಿಗೆ ಬಿದ್ದು ಸಾವನಪ್ಪಿದ ಘಟನೆ ನಡೆದಿದೆ.

ಮಂಜುನಾಥ ವೆಂಕ್ಟ ಮೊಗೇರ (62) ಮೃತ ಮೀನುಗಾರ ಎಂದು ಗುರುತಿಸಲಾಗಿದ್ದು . ಬೆಳಕೆ ಮೊಗೇರಕೇರಿ ನಿವಾಸಿಯಾದ ಇವರು ಮಧ್ಯಾಹ್ನ 4 ಗಂಟೆಗೆ ತಮ್ಮ ಬಿಸು ಬಲೆಯೊಂದಿಗೆ ಬೆಳಕೆ ಹೊಳೆಯಲ್ಲಿ ಮೀನುಗಾರಿಕೆ ಮಾಡುತ್ತಿದ್ದರು. ಬಲೆಯ ಕೈ ದಾರ ಆಕಸ್ಮಿಕವಾಗಿ ಕೊರಳಿಗೆ ಸುತ್ತಿಕೊಂಡು ನೀರಿಗೆ ಜಾರಿಬಿದ್ದು ಸಾವನಪ್ಪಿದ್ದಾರೆ.

ಪ್ರಕರಣ ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಮುಂದುವರಿದಿದೆ

WhatsApp
Facebook
Telegram
error: Content is protected !!
Scroll to Top