ಸಚಿವರಿಂದ ಪ್ರೇರಣೆ ಪಡೆದ ರಿಕ್ಷಾ ಚಾಲಕ ವಿಶ್ವ ನಾಯ್ಕ ಯುವಕರ ತಂಡ ಸಮಾಜ ಸೇವೆಯತ್ತ ಮುಖ
ಭಟ್ಕಳ: ಸಚಿವ ಮಂಕಾಳು ವೈದ್ಯರು ರಾಜ್ಯದಾಧ್ಯಂತ ಜನಪ್ರೀಯ ಸಚಿವರೆಂಬ ಹೆಸರನ್ನು ಪಡೆದಿದ್ದು ಸಚಿವರು ಒಂದಿಲ್ಲೊಂದು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಇದರಿಂದ ಪ್ರೇರೆಪೀತರಾದ ಭಟ್ಕಳ ರಿಕ್ಷಾ ಚಾಲಕ ವಿಶ್ವ ನಾಯ್ಕ ಯುವಕರ ತಂಡ ಸಮಾಜ ಸೇವೆಯತ್ತ ಮುಖ ಮಾಡಿರುವ ಘಟನೆ ನಡೆದಿದೆ
ಭಟ್ಕಳ ತಾಲೂಕಿನ ತೆಂಗಿನಗುಂಡಿಯ ಮಾದೇವ ದುರ್ಗಪ್ಪ ನಾಯ್ಕ ಇವರು ಅನಾರೋಗ್ಯದಿಂದ ಬಳಲುತ್ತಿದ್ದದ್ದನ್ನು ಅರಿತ ತೆಂಗಿನಗುಂಡಿಯ ಕಾಂಗ್ರೆಸ್ ಕಾರ್ಯಕರ್ತರು ಸಚಿವರಾದ ಶ್ರೀ ಮಾಂಕಾಳ ವೈದ್ಯರನ್ನು ಗಮನಕ್ಕೆ ತಂದಾಗ ತಕ್ಷಣಕ್ಕೆ ಧನ ಸಹಾಯ ನೀಡಿದ್ದು ಇದನ್ನು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅವರಿಗೆ ತಲುಪಿಸಿರುತ್ತಾರೆ ಹಾಗೂ ಹೆಚ್ಚಿನ ಚಿಕಿತ್ಸೆಗೆ ತಗಲುವ ವೆಚ್ಚವನ್ನು ತಾವೇ ಬರಿಸೋದಾಗಿ ಉಸ್ತಯವಾರಿ ಸಚಿವರು ತಿಳಿಸಿರುತ್ತಾರೆ ಈ ಒಂದು ಉದಾಹರಣೆ ಸಚಿವರ ಸಮಾಜ ಸೇವೆಗೆ ಹಿಡಿದ ಕನ್ನಡಿಯಾಗಿದೆ
ತೆಂಗಿನಗುಂಡಿಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಸಚಿವರಾದ ಶ್ರೀ ಮಾಂಕಾಳ ವೈದ್ಯ ಸರ್ ಅವರಿಗೆ ತೆಂಗಿನಗುಂಡಿಯ ಗ್ರಾಮಸ್ಥರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿರುತ್ತಾರೆ
ಸಚಿವರ ಈ ಸಮಾಜ ಮುಖಿ ಕಾರ್ಯಗಳು ರಿಕ್ಷಾಚಾಲಕ ವಿಶ್ವಾ ನಾಯ್ಕ ಯುವಕರ ತಂಡದಲ್ಲಿರುವ ನವೀನ್ ನಾಯಕ್ ನಾಯಕ್ ಹೀಗೆ ಅನೇಕ ಯುವಕ ಯುವಕರಿಗೆ ಪ್ರೇರಣೆಯನ್ನು ತಂದು ಈ ಯುವಕರ ತಂಡ ಸಮಾಜ ಸೇವೆಯತ್ತ ಮುಖ ಮಾಡಿದೆ ಇದರ ಶ್ರೇಯಸ್ಸು ಜನ ಮೆಚ್ಚಿದ ನಾಯಕ ಸಚಿವ ಮಂಕಾಳು ವೈದ್ಯರಿಗೆ ಸಲ್ಲುತ್ತದೆ